ಕಾಲ ಬಂದಿದೆ

ಕಾಲ ಬಂದಿದೇ ಅಣ್ಣ ನಮ್ಮ ಕಾಲ ಬಂದಿದೆ ಅಣ್ಣಾ                           ||ಪ||

ಸಾವಿರ ಸಾವಿರ ವರ್ಷದ ಕತ್ತಲೆ ಸಾವು ನೋವುಗಳ ಕಾಲವು ಹೋಗಿ
ಮೂಡಲ ಕೆಂಪಿನ ಕಂಪಿನ ಗಾಳಿಯ ಬೆಳಕಿನ ಕಾಲವು ಅಣ್ಣಾ           ||೧||

ಬೆಳಕನೆಲ್ಲ ಬಚ್ಚಿಟ್ಟುಕೊಂಡು ಬರಿ ಕೊಳಕ ಕುಡಿಸಿದವರ
ಥಳುಕಿನಿಂದ ಕಂಗಳನು ಕುಕ್ಕಿ ಕುರುಡು ಮಾಡಿದವರ                   ||೨||

ಬಯಲಿಗೆಳೆದು ಬೆತ್ತಲೆಯಗೊಳಿಸಿ ಚಮ್ಮಟಿಗೆಯಿಂದ ಥಳಿಸು
ನಯದ ವಂಚಕರ ಸವರಿ ವರೆಸಿ ಮನೆಯನ್ನು ಸ್ವಚ್ಛಗೊಳಿಸು         ||೩||

ಧರ್ಮ ಧರ್ಮವೆಂದಂಧಕಾರವನೆ ರಾಜ್ಯವಾಳಿಸಿದರು
ಕಾಲು ಕೈಗಳನು ಕಟ್ಟಿದ೦ಥ ಕಟ್ಟುಗಳ ಕಿತ್ತು ಎಸೆವ                     ||೪||

ಮೇಲು ಕೀಳುಗಳ ಮಡಿಯ ಮೈಲಿಯ ಕಟ್ಟುಪಾಡು ಕಸವ
ಕಾಲು ಕೈಗಳನು ಕಟ್ಟಿದಂಥ ಕಟ್ಟುಗಳ ಕಿತ್ತು ಎಸೆವ                      ||೫||

ಹೊಸ ಸೆಲೆಯು ಇಲ್ಲದಿರುವಂಥ ಹಳಸು ನೀರಿರುವ ಮೌಢ್ಯ ಹೊಂಡ
ನಿಶೆಯನ್ನು ಉಸಿರು ನೀರೆಂದು ತಿಳಿವ ಅಜ್ಞಾನವಾಯ್ತು ಹೆಂಡ      ||೬||

ನೀತಿ ಶಾಸ್ತ್ರಗಳು ಕೋತಿ ಶಾಸ್ತ್ರಗಳು ನಮಗೆ ಹೇಳಲಿಕ್ಕೆ
ಮಾತು ಬೋಧೆ ತತ್ವಾರ್ಥವೆಲ್ಲ ನಮ್ಮ ಹೂಳಲಿಕ್ಕೆ                      ||೭||

ಪರಮ ಧರ್ಮ ಅಹಿಂಸೆ ಎಂದು ಒತ್ತಿ ಒತ್ತಿ ಸಾರಿ
ಕೊರಡು ಬಡಿದು ಪೌರುಷಪ ಕೊಂದು ಮಾಡಿದರು ಸವಾರಿ          ||೮||

ದಾಸನಾಗು ನಿನ್ನೆಲ್ಲ ಒಪ್ಪಿಸುತ ಕಾಲ ಕೆಳಗೆ ಹೊರಳು
ಭಕ್ತಿ ಮುಕ್ತಿ ಇದೆ ಎಂದು ಕತ್ತಲಲಿ ಎಳೆದರಲ್ಲ ಉರುಲು                ||೯||

ಸ್ನಾನದಂತೆ ಕುಂಯ್ಗುಡುತ ಕಾಲುಗಳ ನೆಕ್ಕಿದ್ದಿನ್ನು ಸಾಕು
ಆನೆಯಂತೆ ಮದ್ದಾನೆಯಂತೆ ತುಳಿದವರ ತುಳಿದು ನೂಕು           ||೧೦||

ಅಂಜಿ ಅಂಜಿ ಕುರಿ ಮಂದೆಯಂತೆ ಇದ್ದವರು ಸಿಂಹದಂತೆ
ಜೂಲು ಕೇಸರವ ಕೆದರಿ ಗರ್ಜಿಸುವ ಸಿಡಿಲು ಮೊಳಗಿದಂತೆ         ||೧೧||

************************************************
೧೧-೬-೮೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಪು ಕಡಲಿನ ರಂಗಿನ ಲೋಕ
Next post ಶೀತಕ್ಕೆ ಔಷಧಿ ಇದೆಯೇ?

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys